|ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಗೆ ಬರುವ ವಿಧಾನಸಭಾ
ಕ್ಷೇತ್ರಗಳನ್ನು ಒಳಗೊಂಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ದಕ್ಷ್-ಎಡಿಆರ್
ನಡೆಸಿದ ಸಮೀಕ್ಷೆಯಲ್ಲಿ ಅಲ್ಲಿನ ಮತದಾರರು ಶಾಸಕರಿಗೆ ಸರಾಸರಿ 5.15 ಅಂಕಗಳನ್ನು
ನೀಡಿದ್ದಾರೆ.
|ಭಾರತದಲ್ಲಿ ಈಚೆಗೆ ವರ್ಷದಿಂದ ವರ್ಷಕ್ಕೆ ಜನರು ಮತ್ತು ಸರಕಾರಗಳ ನಡುವಿನ ಅಂತರ
ಹೆಚ್ಚುತ್ತಿದೆ. ಸರಕಾರಗಳು ನಾಗರಿಕರ ಅಗತ್ಯಗಳ ಕುರಿತು ಸಂವೇದನಾರಹಿತವಾಗಿ,
ನಿರ್ಲಕ್ಷ್ಯ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿವೆ.
|ಚುನಾವಣೆ ಬಂದಾಗ ಒಮ್ಮೆ ಶಾಸಕರನ್ನು ಆರಿಸಿ ಕಳುಹಿಸಿದರೆ ನಮ್ಮ ಜವಾಬ್ದಾರಿ
ಮುಗಿದೇಬಿಟ್ಟಿತು ಎಂದು ಭಾವಿಸುವವರೇ ಹೆಚ್ಚು. ಆರಿಸಿ ಕಳುಹಿಸಿದ ಶಾಸಕರ ಕಾರ್ಯವೈಖರಿಯ
ಮೌಲ್ಯಮಾಪನ ಒತ್ತಟ್ಟಿಗಿರಲಿ ಆ ಶಾಸಕರ ಮುಖ ನೋಡಲು ಸಿಗುವುದೇ ದುರ್ಲಭ ಎನ್ನುವ ಸ್ಥಿತಿ
ಇದೆ.
|ಬೆಂಗಳೂರು ಗ್ರಾಮಾಂತರ ಜಿಲ್ಲೆ , ನಗರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ
ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ದಕ್ಷ್-
ಎಡಿಆರ್ ನಡೆಸಿದ ಸಮೀಕ್ಷೆಯಲ್ಲಿ ಶಾಸಕರಿಗೆ ಸರಾಸರಿ 6.3 ಅಂಕಗಳನ್ನು ಮತದಾರ
ನೀಡಿದ್ದಾನೆ.