|ನಾಳೆ (ಏಪ್ರಿಲ್ 29) ವಿಶ್ವ ನೃತ್ಯ ದಿನ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಲಯನ್ಸ್
ಫ್ರಾಂಚೈಸ್ನಲ್ಲಿ ಇವತ್ತು (ಏಪ್ರಿಲ್ 28, ಭಾನುವಾರ) ಬೆಳಗ್ಗೆ 10ರಿಂದ ರಾತ್ರಿ 10
ರವರೆಗೆ 100 ನೃತ್ಯ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.
|ನಮ್ಮ ಸ್ಮೃತಿಪಟಲದಿಂದ ಮರೆಯಾದ, ಮರೆಯಾಗುತ್ತಿರುವ ಸಂಸ್ಕೃತಿಗೆ ಮರುಜೀವ ನೀಡುವ
ಪ್ರಯತ್ನವಾಗಿ ಬೆಂಗಳೂರಿನ ಹೋಮ್ಟೌನ್ ಪ್ರೊಡಕ್ಷನ್ಸ್ ‘ಹವೇಲಿ’ ಶೀರ್ಷಿಕೆಯಡಿ
ವಿಶಿಷ್ಟವಾದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಿದೆ.
|ಉತ್ತಮ ನೌಕರಿಗಾಗಿ ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರಬೇಕು ಎನ್ನುವವರ ನಡುವೆ
ಹಳ್ಳಿಯಲ್ಲೇ ಬದುಕು ರೂಪಿಸಿಕೊಂಡವರು ಸತೀಶ್ ಶಾನಭಾಗ. ಕೊಳಲು ತಯಾರಿಕೆ ಇವರ ವೃತ್ತಿ.
ಸ್ವತಃ 40ಕ್ಕೂ ಹೆಚ್ಚು ರಾಗಗಳನ್ನು ನುಡಿಸಬಲ್ಲ ಇವರು ಉತ್ತಮ ವೇಣು ವಾದಕರೂ ಹೌದು.
|ಯುಗಾದಿಯಲ್ಲಿ ಎರಡು ವಿಧ. ಚಂದ್ರಮಾನ ಮತ್ತು ಸೌರಮಾನ. ತುಳುನಾಡಿನ ಪ್ರದೇಶ ಮತ್ತು
ಕೇರಳದಲ್ಲಿ ಸೌರಮಾನ ಯುಗಾದಿಗೆ ವಿಶೇಷ ಪ್ರಾಶಸ್ತ್ಯ. ಈ ಹಬ್ಬವನ್ನು ಅವರು ವರ್ಷದ ಮೊದಲ
ಹಬ್ಬವೆಂದೇ ಭಾವಿಸುತ್ತಾರೆ.
|ಪ್ರತಿ ವರ್ಷವೂ ಯುಗಾದಿ ಹಬ್ಬವು ಸ್ಯಾಂಡಲ್ವುಡ್ಗೆ ಬೇವಾಗಿಯೇ ಇರುತ್ತಿತ್ತು. ಈ ಬಾರಿ
ಬೆಲ್ಲ ಜಾಸ್ತಿ ಇದೆ. ಕನ್ನಡ ಚಿತ್ರೋದ್ಯಮ ಯಶಸ್ಸಿನ ಗುಂಗಿನಲ್ಲಿದೆ. ಹಾಗಾಗಿ
ಸಂಭ್ರಮದಲ್ಲಿಯೇ ಯುಗಾದಿ ಹಬ್ಬವನ್ನು ಆಚರಿಸುತ್ತಿದೆ.
|ಮತ್ತೆ ಯುಗಾದಿ ಬಂದಿದೆ. ಹಿಂದೂ ಧರ್ಮದ ಪ್ರಕಾರ ಯುಗಾದಿ ಅಂದರೆ ಹೊಸ ವರ್ಷ. ಹೊಸ ವರ್ಷದ
ಆಚರಣೆಯಲ್ಲಿ ಬೇವು -ಬೆಲ್ಲ ಹಂಚಿಕೊಂಡು ಜೀವನದ ಕಷ್ಟ -ಸುಖಗಳನ್ನು ಸಮನಾಗಿ
ಸ್ವೀಕರಿಸುವ ಸಂದೇಶವನ್ನು ಕೊಡುತ್ತೇವೆ.
|ಇವರು ಕನ್ನಡತಿಯರಲ್ಲ. ಆದರೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೇರೆ ಯಾವುದೋ
ತೀರದಿಂದ ಬಂದು, ಇಲ್ಲಿನ ಪ್ರೇಕ್ಷಕರಿಗೆ ಪರಿಚಿತರಾದವರು. ಸದ್ಯ ತಮ್ಮ ತವರು ನೆಲದಲ್ಲಿ,
ಮನೆಯ ಗೂಡಿನಲ್ಲಿನ ಯುಗಾದಿ ಆಚರಣೆಯ ನೆನಪಿನೊಂದಿಗೆ ಇಲ್ಲಿ ಪುಳಕಗೊಂಡಿದ್ದಾರೆ.